ಭಾರತ ಹಿಂದೂ ರಾಷ್ಟ್ರವಾಗಲು ರಾಷ್ಟ್ರವ್ಯಾಪಿ ಹಿಂದೂ ಸಂಘಟನೆಯ ನಿರ್ಧಾರ!

ಎಡದಿಂದ ಶ್ರೀ.ರಮೇಶ ಶಿಂದೆ, ಶ್ರೀ.ಅನಿಲ ಧೀರ, ಪೂ.ಡಾ.ಚಾರುದತ್ತ ಪಿಂಗಳೆ, 
ಶ್ರೀ.ತಪನಕುಮಾರ ಘೋಷ, ಶ್ರೀ.ನವಲಕಿಶೋರ ಶರ್ಮ ಮತ್ತು ಶ್ರೀ.ಅಶ್ವನಿಕುಮಾರ ಚ್ರೊಂಗೂ
ದ್ವಿತೀಯ ಹಿಂದೂ ಅಧಿವೇಶನ ಸಂಪನ್ನ!

ರಾಮನಾಥಿ (ಗೋವಾ): ಭಾರತವು ಸ್ವಯಂಭೂ ಹಿಂದೂ ರಾಷ್ಟ್ರವಾಗಿದ್ದು ಹಿಂದೂ ತತ್ತ್ವಜ್ಞಾನ, ಹಿಂದೂ ಧರ್ಮಶಾಸ್ತ್ರ, ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಮಾಜ ಇವುಗಳ ರಕ್ಷಣೆಗಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಈ ಅಧಿವೇಶನದಲ್ಲಿ ‘ಜಯತು ಜಯತು ಹಿಂದೂ ರಾಷ್ಟ್ರಮ್|’ 

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮಾಡಬೇಕಾದ ಪ್ರಯತ್ನಗಳಲ್ಲಿ ಈ ಅಧಿವೇಶನವು ಎಲ್ಲಕ್ಕಿಂತ ಮಹತ್ವದ ಹೆಜ್ಜೆಯೆಂದು ಇತಿಹಾಸದಲ್ಲಿ ನೋಂದಣಿಯಾಗುವುದು!

ಈ ಅಧಿವೇಶನದ ಉದ್ದೇಶ ಶೇ.೧೦೦ರಷ್ಟು ಸಫಲವಾಗಿದೆ ಎಂದು ಹೇಳಲು ನನಗೆ ಆನಂದ ವಾಗುತ್ತದೆ. ಎಲ್ಲರ ಮನಸ್ಸು ಒಂದಾಗಿದೆ ಮತ್ತು ಅನೇಕರ ಮನಸ್ಸಿನಲ್ಲಿ ಸಾಧನೆಯ ಬೀಜ ಬಿತ್ತಲ್ಪಟ್ಟಿದೆ. ಮುಂದಿನ ವರ್ಷದಲ್ಲಿ ಇವೆರಡೂ ವಿಷಯ ದಲ್ಲಿ ಬಹಳಷ್ಟು ಹೆಚ್ಚಳವಾಗುವುದು ಮತ್ತು ಮುಂದಿನ ಅಧಿವೇಶನದ ನಂತರ ಪಾಲ್ಗೊಳ್ಳುವ ವಿವಿಧ ಸಂಸ್ಥೆಗಳ ಹೆಸರು ಬೇರೆ ಬೇರೆಯಾಗಿದ್ದರೂ, ಒಂದೇ ಸಂಸ್ಥೆಯ ಕಾರ್ಯಕರ್ತರು ಮತ್ತು ಸಾಧಕರು ಎಂಬಂತೆ ಎಲ್ಲರೂ ಕಾರ್ಯ ನಿರ್ವಹಿ ಸುವರು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮಾಡಬೇಕಾದ ಪ್ರಯತ್ನದಲ್ಲಿ ಇದು ಎಲ್ಲ ಕ್ಕಿಂತ ಮಹತ್ವದ ಹೆಜ್ಜೆ ಯಾಗುವುದು.
ಜಯತು ಜಯತು ಹಿಂದೂ ರಾಷ್ಟ್ರಮ್|
- (ಪ.ಪೂ.) ಡಾ.ಆಠವಲೆ (ಜ್ಯೇಷ್ಠ ಶುಕ್ಲ ಪಕ್ಷ ೧, ಕಲಿಯುಗ ವರ್ಷ ೫೧೧೫ (೯.೬.೨೦೧೩))

ಸನಾತನದ ರಾಮನಾಥಿ ಆಶ್ರಮಕ್ಕೆ ಧರ್ಮಾಚಾರ್ಯ ಮತ್ತು ಹಿಂದುತ್ವವಾದಿಗಳ ಸದಿಚ್ಛೆ ಭೇಟಿ!

ಸನಾತನ ಆಶ್ರಮ, ರಾಮನಾಥಿ, ಗೋವಾ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಗೋವಾದ ರಾಮನಾಥಿಯಲ್ಲಿ ನಡೆದ ದ್ವಿತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನದ ನಿಮಿತ್ತ ವಿವಿಧ ರಾಜ್ಯಗಳಿಂದ ಸಂತರು, ಧರ್ಮಾಚಾರ್ಯರು ಮತ್ತು ಹಿಂದುತ್ವವಾದಿಗಳು ಗೋವಾಗೆ ಆಗಮಿಸಿದ್ದರು. ಜೂನ್ ೫ರಂದು ಮಲೇಶಿಯಾ ಮತ್ತು ಶ್ರೀಲಂಕಾದ ಧರ್ಮಾಚಾರ್ಯ ಸ್ವಾಮಿ ಕುಮಾರಾನಂದ, ಶ್ರೀರಾಮ ಸೇನೆಯ ಅಧ್ಯಕ್ಷರಾದ ಶ್ರೀ.ಪ್ರಮೋದ ಮುತಾಲಿಕ ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರು ಮತ್ತು ಇತರ ಗಣ್ಯರು ಸನಾತನದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.

ಹಿಂದೂಗಳ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯಾಗದೆ ಪರ್ಯಾಯವಿಲ್ಲ!

ಸರಕಾರಕ್ಕೆ ಗೋಶಾಲೆಗಾಗಿ ಅನುದಾನ ನೀಡಿ, ಪಾಕಿಸ್ತಾನದಿಂದ ಪಲಾಯನ ಗೊಂಡು ಬಂದಿರುವ ಹಿಂದೂಗಳನ್ನು ಶರಣಾರ್ಥಿ ಎಂದು ಸ್ವೀಕರಿಸಿ, ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಿ!, ಗೋಹತ್ಯಾನಿಷೇಧದ ಕಾನೂನು ಮಾಡಿ, ಸಮಾನ ನಾಗರಿಕ ಕಾನೂನು ಮಾಡಿ!, ದೇವತೆಗಳ ವಿಡಂಬನೆ ತಡೆ ಯಲು ಕಠಿಣ ಕಾನೂನು ಜ್ಯಾರಿಗೊಳಿಸಿ!, ಹೀಗೆ ಅನೇಕ ವಿನಂತಿ ಮಾಡುವುದಕ್ಕಿಂತ ಹಿಂದೂಹಿತದ ಹಿಂದೂ ರಾಷ್ಟ್ರವನ್ನೇ ಸ್ಥಾಪಿಸೋಣ, ಅದರಿಂದ ಯಾರಿಗೂ ವಿನಂತಿ ಮಾಡಬೇಕಾಗುವುದಿಲ್ಲ! ಈ ಬಗ್ಗೆ ಸಂತ ಕಬೀರರ ಏಕ ಸಾಧೈ ಸಬ ಸಾಧೈ, ಸಬ ಸಾಧೈ ಸಬ ಜಾಯ! (ಅಂದರೆ ಒಂದನ್ನು ಸಾಧಿಸಿದರೆ ಎಲ್ಲವನ್ನೂ ಸಾಧಿಸ ಬಹುದು ಮತ್ತು ಎಲ್ಲವನ್ನು ಸಾಧಿಸಲು ಪ್ರಯತ್ನಿಸಿದರೆ ಏನೂ ಸಾಧಿಸಲು ಆಗುವು ದಿಲ್ಲ.) ಈ ಸುವಚನವನ್ನು ಗಮನದಲ್ಲಿಡು ವುದು ಆವಶ್ಯಕವಾಗಿದೆ. ಗೋರಕ್ಷಣೆ, ಗಂಗಾರಕ್ಷಣೆ, ದೇವಸ್ಥಾನ ರಕ್ಷಣೆ, ಸಂಸ್ಕೃತಿರಕ್ಷಣೆ, ಹಿಂದೂ ಧರ್ಮಿಯರ ರಕ್ಷಣೆ, ಲವ್ ಜಿಹಾದ್‌ಗೆ ಪ್ರತಿಕಾರ ಇತ್ಯಾದಿ ಎಲ್ಲ ವನ್ನೂ ಪಡೆಯಲು ಪ್ರಯತ್ನಿಸಿದರೆ ಏನೂ ಸಾಧಿಸಲು ಆಗುವುದಿಲ್ಲ. ತದ್ವಿರುದ್ಧ ಹಿಂದೂ ರಾಷ್ಟ್ರದ ಸ್ಥಾಪನೆ ಇದೊಂದು ಸಾಧ್ಯವಾದರೆ ಎಲ್ಲವೂ ಸಾಧಿಸಿದಂತಾಗುತ್ತದೆ. - (ಪ.ಪೂ.)ಡಾ.ಆಠವಲೆ (ವೈಶಾಖ ಹುಣ್ಣಿಮೆ, ಕಲಿಯುಗ ವರ್ಷ ೫೧೧೫ (೨೫.೫.೨೦೧೩))

ಒಂದು ಐತಿಹಾಸಿಕ ಪರ್ವದ ಆರಂಭ!

ಅಖಿಲ ಭಾರತೀಯ ಹಿಂದೂ ಅಧಿವೇಶನದ ನಿಮಿತ್ತ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯ ಏಕೈಕ ಧ್ಯೇಯವನ್ನಿಟ್ಟುಕೊಂಡು ೨೧ರಾಜ್ಯಗಳ ೨೫೦ಕ್ಕೂ ಹೆಚ್ಚು ಹಿಂದುತ್ವವಾದಿಗಳು ಸಂಘಟಿತರಾಗುವುದು, ಒಂದು ಐತಿಹಾಸಿಕ ಘಟನೆಯೆಂದೇ ಹೇಳಬೇಕು. ಹಿಂದೂಗಳನ್ನು ಕಾಡುವ ಅನೇಕ ಸಮಸ್ಯೆಗಳು ಮತ್ತು ಅದರ ಮೇಲಿನ ಉಪಾಯಯೋಜನೆಗಳ ಬಗ್ಗೆ ಧೋರಣಾತ್ಮಕ ಚರ್ಚೆಗಳು ಅಧಿವೇಶನದಲ್ಲಿ ನಡೆಯಿತು. ಯಾವುದೇ ಅಧಿವೇಶನ, ಪರಿಷತ್ತು ಅಥವಾ ಕಾರ್ಯಕ್ರಮ ಜರುಗಿದ ನಂತರ ಅದರ ಫಲನಿಷ್ಪತ್ತಿಯ ಬಗ್ಗೆ ಚರ್ಚೆಯಾಗುತ್ತದೆ. ಅಖಿಲ ಭಾರತೀಯ ಹಿಂದೂ ಅಧಿವೇಶನದ ಫಲನಿಷ್ಪತ್ತಿಯ ಬಗ್ಗೆಯೂ ಇಂತಹ ಚರ್ಚೆ ನಡೆಯಿತು. ಯಾವೆಲ್ಲ ಹಿಂದುತ್ವವಾದಿಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ಅಧಿವೇಶನದೊಂದಿಗೆ ಜೋಡಿಸ ಲ್ಪಟ್ಟರೋ, ಅವರಿಗೆ ಈ ಅಧಿವೇಶನದ ಉದ್ದೇಶವು ಸಫಲವಾಗಿರುವುದು ನಿಜವಾಗಿಯೂ ಗಮನಕ್ಕೆ ಬರುತ್ತದೆ.
ಹಿಂದೂಗಳಿಗೆ ಪ್ರಖರ

ಪ.ಪೂ.ಡಾಕ್ಟರರು ಹಿಂದೂ ರಾಷ್ಟ್ರದ ಸಂವಿಧಾನವನ್ನು ತಯಾರಿಸಬೇಕೆಂದು, ಅವರಿಗೆ ಪ್ರಾರ್ಥಿಸುವ ಹಿಂದೂ ಹೆಲ್ಪ್‌ಲೈನ್‌ನ ಶ್ರೀ.ಪಾರಸ್ ರಜಪೂತ!

ಪಾಕಿಸ್ತಾನದ ನಿರ್ಮಾಣಕ್ಕಾಗಿ ಯಾವುದೇ ಪ್ರಯತ್ನವಾಗುತ್ತಿರುವುದು ಹೊರಗಿನಿಂದ ಕಾಣಿಸುತ್ತಿರಲಿಲ್ಲ; ಆದರೆ ಭಾರತ ಸ್ವತಂತ್ರವಾಗುವ ಒಂದು ದಿನ ಮೊದಲೇ ಪಾಕಿಸ್ತಾನ ನಿರ್ಮಾಣವಾಯಿತು. ಅದರ ಕಾರಣವೆಂದರೆ ಪಾಕಿಸ್ತಾನದ ಸಂವಿಧಾನ ಮೊದಲೇ ತಯಾರಾಗಿತ್ತು. ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಮೊದಲು ಹಿಂದೂ ರಾಷ್ಟ್ರದ ಸಂವಿಧಾನವನ್ನು ತಯಾರಿಸಿಡುವ ಅವಶ್ಯಕತೆಯಿದೆ. ಅದನ್ನು ತಯಾರಿಸುವುದು ಸುಲಭದ ಹಾಗೂ ಯಾರೂ ಮಾಡುವ ವಿಷಯವಲ್ಲ, ಎಂಬುದು ನನಗೆ ತಿಳಿದಿದೆ. ಅದಕ್ಕಾಗಿ ನಾನು ಪ.ಪೂ. ಡಾ.ಜಯಂತ ಆಠವಲೆಯವರಲ್ಲಿ ಅವರು ಹಿಂದೂ ರಾಷ್ಟ್ರದ ಸಂವಿಧಾನವನ್ನು ತಯಾರಿಸಬೇಕೆಂದು ಪ್ರಾರ್ಥಿಸುತ್ತೇನೆ.

ಹಿಂದೂಗಳನ್ನು ಜಾಗೃತಗೊಳಿಸುವುದೇ ಕಾಲಾನುಸಾರ ಸಾಧನೆಯಾಗಿರುವುದು


ಶ್ರೀ.ಶಂಕರ ನರೂಟೆ
೧.ಅಧಿವೇಶನದ ವ್ಯಾಖ್ಯೆ
‘ಅಧಿವೇಶನ’ವೆಂದರೆ...
ಅ: ಹಿಂದೂ ಧರ್ಮಕ್ಕೆ ನೇತೃತ್ವ ಮಾಡುವ ಅಧಿಕಾರ (ಸಮರ್ಥ) ಇರುವ
ಧಿ: ಹಿಂದೂಗಳಿಗೆ ಧೈರ್ಯ ನೀಡುವ
ವೇ: ಹಿಂದೂಗಳನ್ನು ವೇಗವಾಗಿ ಜಾಗೃತಗೊಳಿಸುವ
ಶ: ಹಿಂದೂಗಳನ್ನು ದೇವರಿಗೆ ಶರಣಾಗಲು ಕಲಿಸುವ
ನ: ರಾಮನ ಬಾಣವಾಗಿ ಹಿಂದೂಗಳನ್ನು ರಕ್ಷಣೆ ಮಾಡುವ

ಈ ರೀತಿ ಕತ್ತಲೆಯಲ್ಲಿರುವ ಹಿಂದೂಗಳನ್ನು ಮಹಾನ ಸೂರ್ಯರೂಪಿ ಸನಾತನ ಹಿಂದೂ ಧರ್ಮವನ್ನು ಬೆಳಕಿಗೆ ತರುವ ಅಧಿವೇಶನ!

ಅಧಿವೇಶನ ನಿರ್ವಿಘ್ನವಾಗಿ ನೆರವೇರಲು ಪ.ಪೂ.ಕರ್ವೇ ಮಹಾರಾಜರಿಂದ ಪ್ರಾರ್ಥನೆ!

ಈ ಅಧಿವೇಶನವು ನಿರ್ವಿಘ್ನವಾಗಿ ಯಶಸ್ವಿ ಯಾಗಲಿ, ಎಂಬುದಕ್ಕಾಗಿ ಪ.ಪೂ.ಕರ್ವೇ ಮಹಾರಾಜರು ಮೊದಲ ದಿನದ ಮಂತ್ರೋಚ್ಛಾರಣೆ ಮಾಡಿದರು ಹಾಗೂ ಅಲ್ಲಿ ಉಪಸ್ಥಿತರಿದ್ದವ ರೆಲ್ಲರಿಂದ ಎದ್ದುನಿಲ್ಲಿಸಿ ವೈಖರಿಯಲ್ಲಿ ಪ್ರಾರ್ಥನೆ ಮಾಡಿಸಿದರು.

ನಾಸ್ತಿಕ ಹಿಂದೂ ಯುವಕರಿಗೆ ಆಸ್ತಿಕ ಮತ್ತು ಪ್ರಖರ ಹಿಂದುತ್ವವಾದಿಯನ್ನಾಗಿ ತಯಾರಿಸಿದೆವು! - ಶ್ರೀ. ಕೃಷ್ಣದೇವ ಆರ್ಯ, ರಾಷ್ಟ್ರೀಯ ಆರ್ಯ ನಿರ್ಮಿತಿ ಸಭಾ, ಹರಿಯಾಣಾ

ಹರಿಯಾಣಾ, ಉತ್ತರಪ್ರದೇಶ, ದೆಹಲಿ, ರಾಜಸ್ಥಾನ ಮುಂತಾದ ಭಾಗದ ಸಾವಿರಾರು ಯುವಕರಿಗೆ ಹಿಂದೂ ಧರ್ಮದ ಜ್ಞಾನ ನೀಡಲಾಗಿದೆ. ಈಗ ಅವರು ಈಶ್ವರನ ಭಕ್ತಿಯನ್ನೂ ಮಾಡುತ್ತಿದ್ದಾರೆ ಹಾಗೂ ಅವರು ಪ್ರಖರ ಹಿಂದುತ್ವವಾದಿಗಳಾಗಿದ್ದಾರೆ.

ಹಿಂದೂ ವಿಧಿಜ್ಞ ಪರಿಷತ್ತು ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಸಹಾಯ ಮಾಡಲು ಸದಾ ಸಿದ್ಧ! - ನ್ಯಾಯವಾದಿ ಸಂಜೀವ ಪುನಾಳೆಕರ, ರಾಷ್ಟ್ರೀಯ ಕಾರ್ಯದರ್ಶಿ, ಹಿಂದೂ ವಿಧಿಜ್ಞ ಪರಿಷತ್ತು

ಮೊದಲ ಅಖಿಲ ಭಾರತೀಯ ಹಿಂದೂ ಅಧಿವೇಶನದ ಸಮಯದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ಸ್ಥಾಪನೆ ಮಾಡಲಾಯಿತು. ಹಿಂದೂಗಳ ಹಿತಕ್ಕಾಗಿ ಕಾರ್ಯ ಮಾಡುವಾಗ ದೌರ್ಜನ್ಯಕ್ಕೊಳಗಾದವರಿಗೆ ಸಹಾಯ ಮಾಡುವುದು ಹಿಂದೂ ವಿಧಿಜ್ಞ ಪರಿಷತ್ತಿನ ಉದ್ದೇಶವಾಗಿದೆ.
ಹಿಂದೂ ವಿಧಿಜ್ಞ ಪರಿಷತ್ತು ವರ್ಷವಿಡಿ ಮಾಡಿದ ಕಾರ್ಯ
೧.ಹಿಂದೂ ಉಗ್ರವಾದ ಈ ಸಂಕಲ್ಪನೆಯು ಬೇರೂರುವುದಕ್ಕಾಗಿ ಹಿಂದಿನ ಕೆಲವು ವರ್ಷಗಳಿಂದ ದೇಶ ದಾದ್ಯಂತ ನಡೆದ ಬಾಂಬ್‌ಸ್ಪೋಟಗಳಲ್ಲಿ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಲಾಗಿತ್ತು. ಇದೇ ರೀತಿ ಮಾಲೆಗಾವ ಬಾಂಬ್‌ಸ್ಪೋಟದಲ್ಲಿಯೂ ಹಿಂದುತ್ವವಾದಿಗಳನ್ನು ಬಂಧಿಸಲಾಗಿದೆ. ಅವುಗಳಲ್ಲಿನ ಕೆಲವು ಕಾರ್ಯ ಕರ್ತರಿಗೆ ಈ ಪರಿಷತ್ತು ನ್ಯಾಯಾಲಯದ ಸಹಾಯ ಮಾಡುತ್ತಿದೆ.

ಪ್ರತಿದಿನ ೪೦೦ ಹಿಂದೂಗಳಿಗೆ ಸಹಾಯ! - ಶ್ರೀ.ಪಾರಸ ರಾಜಪುತ, ಹಿಂದೂ ಹೆಲ್ಪಲೈನ್

ಹಿಂದೂ ಹೆಲ್ಪಲೈನ್ ಮಾಧ್ಯಮದಿಂದ ಪ್ರತಿದಿನ ೪೦೦ದೂರವಾಣಿ ಮತ್ತು ಸಂಚಾರಿವಾಣಿಗಳ ಮಾಧ್ಯಮದಿಂದ ಸಂಪರ್ಕಿಸಿ ಹಿಂದೂಗಳ ಅಡಚಣೆಗಳನ್ನು ಪರಿಹರಿಸಲು ಪ್ರಯತ್ನಿಸ ಲಾಗುತ್ತದೆ. ಅಲ್ಲದೇ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಸೈಲೆಂಟ್ ಜಿಹಾದ್, ಪೊಲಿಟಿಕಲ್ ಜಿಹಾದ್ ಇತ್ಯಾದಿ ವಿವಿಧ ಪ್ರಕಾರಗಳ ೧೨ಜಿಹಾದ್‌ಗಳ ವಿಷಯ ದಲ್ಲಿ ಹಿಂದೂಗಳಲ್ಲಿ ಜಾಗೃತಿ ಮಾಡಲಾಗುತ್ತದೆ. ಲವ್ ಜಿಹಾದ್ ಖಟ್ಲೆಗಳನ್ನು ಯೋಗ್ಯ ರೀತಿಯಲ್ಲಿ ನಡೆಸಲು ಪೀಡಿತ ಸ್ತ್ರೀ ಯನ್ನು ಒಮ್ಮೆಯಾದರೂ ನ್ಯಾಯಾಲಯದಲ್ಲಿ ಉಪಸ್ಥಿತವಿರಿಸಲೆಂದು ಹಿಂದೂ ಹೆಲ್ಪಲೈನ್ ಸಕ್ರಿಯವಿದೆ.

ಕರ್ನಾಟಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಶ್ರೀರಾಮ ಸೇನೆಯಿಂದ ತೀವ್ರ ವಿರೋಧ! - ಶ್ರೀ. ಪ್ರಮೋದ ಮುತಾಲಿಕ, ಅಧ್ಯಕ್ಷ, ಶ್ರೀರಾಮ ಸೇನೆ

೧.ಕಳೆದ ಅನೇಕ ವರ್ಷಗಳಿಂದ ಮಾಡಿದ ಜಾಗೃತಿಯಿಂದ ಕರ್ನಾಟಕದಲ್ಲಿ ವ್ಯಾಲೆಂಟೈನ್ ಡೇ ಆಚರಿಸುವುದು ಈಗ ಶೇ.೫೦ರಷ್ಟು ಕಡಿಮೆಯಾಗಿದೆ. ಉಳಿದ ತಪ್ಪುಆಚರಣೆಗಳು ಕಡಿಮೆ ಯಾಗಲು ಈಗ ಜಾಗೃತಿ ನಡೆಯುತ್ತಿದೆ.
೨.೧ಸಾವಿರ ದೇವಸ್ಥಾನಗಳನ್ನು ಕೆಡವಿದ ಟಿಪ್ಪು ಸುಲ್ತಾನನ ಹೆಸರಿನಿಂದ ಸ್ಥಾಪಿಸಲಿರುವ ಮುಸ್ಲಿಂ ವಿಶ್ವ ವಿದ್ಯಾಲಯಕ್ಕೂ ಸೇನೆಯ ಪರವಾಗಿ ದೊಡ್ಡ ಪ್ರಮಾಣ ದಲ್ಲಿ ವಿರೋಧ ವ್ಯಕ್ತಪಡಿಸ ಲಾಗುತ್ತಿದೆ.
೩.ಚಲನಚಿತ್ರದಲ್ಲಿ ವೀಣಾ ಮಲಿಕ ಎಂಬ ಪಾಕ್‌ನ ನಟಿಯು ಅಭಿನಯ ಮಾಡಲು ಶ್ರೀರಾಮ ಸೇನೆಯು ವಿರೋಧಿಸಿತ್ತು.
೪.ಇದು ವರೆಗೆ ಲವ್ ಜಿಹಾದ್‌ಗೆ ಬಲಿಯಾಗಿದ್ದ ೧೩ಸಾವಿರ ಯುವತಿಯ ರನ್ನು ಶ್ರೀರಾಮ ಸೇನೆಯು ರಕ್ಷಿಸಿದೆ.
೫.ಶ್ರೀರಾಮ ಸೇನೆಯು ಇದು ವರೆಗೆ ೧೩ ಸಾವಿರ ಯುವಕರಿಗೆ ಸ್ವರಕ್ಷಣಾ ತರಬೇತಿಯನ್ನು ನೀಡಿದೆ.

ಪ್ರಥಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ನಂತರ ಮಾಡಿದ ಜಾಗೃತಿಯಿಂದ ಮುಸಲ್ಮಾನ ಬಹುಸಂಖ್ಯಾತ ಬಂಗಾಲದಲ್ಲಿ ಹಿಂದೂಗಳು ಪ್ರತಿಕ್ರಿಯೆ ವ್ಯಕ್ತಪಡಿಸಲು ಪ್ರಾರಂಭಿಸಿದರು! - ಆಚಾರ್ಯ ಯೋಗೇಶ ಶಾಸ್ತ್ರಿ, ಆರ್ಯ ಪ್ರತಿನಿಧಿ ಸಭೆ, ಬಂಗಾಲ

ಮುಸಲ್ಮಾನ ಬಹು ಸಂಖ್ಯಾತ ಬಂಗಾಲದಲ್ಲಿ ಹಿಂದೂಗಳು ಈ ಹಿಂದೆ ಎಂದೂ ಕೂಡ ಗೋ ರಕ್ಷಣೆಯ ಸಂದರ್ಭವಾಗಿ ವಿಚಾರ ಮಾಡಲು  ಕೂಡ ಸಾಧ್ಯವಾಗುತ್ತಿರಲಿಲ್ಲ; ಆದರೆ ಪ್ರಥಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ನಂತರ ಅಲ್ಲಿ ಮಾಡಿದ ಜಾಗೃತಿ ಹಾಗೂ ಕೈಗೊಂಡ ಉಪಕ್ರಮ ದಿಂದ ಬಂಗಾಲದಲ್ಲಿ ಹಿಂದೂಗಳು ಈಗ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಒಮ್ಮೆ ಓರ್ವ ಕಟುಕನು ಕೆಲವು ಹಸುಗಳನ್ನು ಹತ್ಯೆ ಮಾಡಲು ಕೊಂಡೊಯ್ಯುತ್ತಿ ದ್ದನು. ಆಗ ಅಲ್ಲಿದ್ದ ಕೆಲವು ಆರ್ಯ ಪ್ರತಿನಿಧಿ ಸಭೆಯ ಕಾರ್ಯಕರ್ತರು ಆ ಬಗ್ಗೆ ಕಟುಕನನ್ನು ವಿಚಾರಿಸಿದಾಗ, ‘ಹತ್ಯೆ ಮಾಡಲು ಕೊಂಡೊ ಯ್ಯುತ್ತಿದ್ದೇನೆ, ಏನದಕ್ಕೆ?, ಎಂದು ಉದ್ಧಟವಾಗಿ ಉತ್ತರಿಸಿದನು.

ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದಲ್ಲಿ ರಾಜ್ಯರಚನೆಯ ಧೋರಣೆ ಹೇಗಿರುವುದು?

ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಅಂದರೆ ರಾಜಕಾರಣವಲ್ಲ; ಅದೊಂದು ಧರ್ಮಾಧಿಷ್ಠಿತ ಮತ್ತು ರಾಷ್ಟ್ರನಿಷ್ಠ ಜೀವನ ನಡೆಸುವ ಒಂದು ಪ್ರಗಲ್ಭ ಸಂಸ್ಕೃತಿ ಮತ್ತು ವ್ಯವಸ್ಥೆಯಾಗಿರುವುದು. ಹಿಂದೂ ರಾಷ್ಟ್ರವು ವಿಶ್ವಕಲ್ಯಾಣಕ್ಕಾಗಿ ಸಾತ್ತ್ವಿಕ ಜನರು ನಡೆಸಿದ ರಾಷ್ಟ್ರವಾಗಿರುವುದು. ಅದರಿಂದಾಗಿ ರಾಷ್ಟ್ರರಚನೆ, ರಾಜಕಾರಣ, ಸಮಾಜಕಾರಣ, ರಕ್ಷಣೆ, ನ್ಯಾಯವ್ಯವಸ್ಥೆ, ನಾಗರಿಕ ಜೀವನ, ವಿಜ್ಞಾನ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ಆದರ್ಶ ವ್ಯವಸ್ಥೆ ನಿರ್ಮಾಣ ಮಾಡಲು ಹಿಂದೂ ರಾಷ್ಟ್ರವು ಕಟಿಬದ್ಧವಾಗಿರುವುದು. ಈಗಿನ ಪ್ರಜಾಪ್ರಭುತ್ವವು ನಿರ್ಮಿಸಿದ ಪ್ರತಿಯೊಂದು ಸಮಸ್ಯೆಯ ಮೂಲಕ್ಕೆ ಹೋಗಿ ಅದಕ್ಕೆ ಪರಿಹಾರೋಪಾಯ ಕಂಡುಹಿಡಿಯುವ ಕಾರ್ಯವನ್ನು ಮಾಡಲಾಗುವುದು. ಈಗಿನ ಅರಾಜಕತೆಯನ್ನು ದೂರಗೊಳಿಸಿ ರಾಜ್ಯದ ಪ್ರತಿಯೊಂದು ಘಟಕವನ್ನು ಆನಂದದಾಯಿ ಮತ್ತು ಸಮಾಧಾನಿಯನ್ನಾಗಿಸಲು ಹಿಂದೂ ರಾಷ್ಟ್ರದ ರಾಜಕಾರಣಿಗಳು ಕಾರ್ಯ ನಿರ್ವಹಿಸುವರು. ರಾಜ್ಯವ್ಯವಸ್ಥೆಯ ಪ್ರತಿಯೊಂದು ಘಟಕದ ಸಬಲೀಕರಣವನ್ನು ಆ ಸಮಯದಲ್ಲಿ ಮಾಡಲಾಗುವುದು. ಈ ಹಿಂದೂ ರಾಷ್ಟ್ರದಲ್ಲಿ ರಾಜ್ಯರಚನೆಯ ಧೋರಣೆಯು ಹೇಗಿರಬಹುದು ಎಂಬುದನ್ನು ಸ್ವಲ್ಪದರಲ್ಲಿ ಮುಂದೆ ನೀಡಲಾಗಿದೆ.

ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಸಾರದ ಕಾರ್ಯದಿಂದ ದೇಶದಾದ್ಯಂತದ ಲಕ್ಷಗಟ್ಟಲೆ ಹಿಂದೂಗಳಲ್ಲಿ ಧರ್ಮಜಾಗೃತಿ! - ಚಿತ್ತರಂಜನ ಸುರಾಲ, ರಾಷ್ಟ್ರೀಯ ಸಂಘಟಕ, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಸಾಪ್ತಾಹಿಕ ಧರ್ಮಸತ್ಸಂಗ ಮತ್ತು ಬಾಲಸಂಸ್ಕಾರ ವರ್ಗಗಳನ್ನು ತೆಗೆದುಕೊಳ್ಳ ಲಾಗುತ್ತದೆ. ಅದರೊಂದಿಗೆ ಸಮಿತಿಯು ಧಾರ್ಮಿಕ ಕೃತಿ ಗಳ ಹಿಂದಿನ ಶಾಸ್ತ್ರ ಹೇಳುವ ಧರ್ಮಸತ್ಸಂಗ ಮಾಲಿಕೆಗಳ ಒಟ್ಟು ೩೬೭ಭಾಗಗಳನ್ನು ತಯಾರಿಸಿದೆ. ಅವುಗಳ ಭಾರತದಾದ್ಯಂತದ ೫೧ಸ್ಥಳೀಯ ದೂರಚಿತ್ರವಾಹಿನಿಗಳಲ್ಲಿ ನಿಯಮಿತ ಪ್ರಸಾರವಾಗುತ್ತಿದ್ದರಿಂದ ಪ್ರತಿ ದಿನ ೨೪ಲಕ್ಷದ ೬೭ಸಾವಿರದ ೮೦೦ ಹಿಂದೂಗಳು ಅದರ ಲಾಭ ಪಡೆಯುತ್ತಿ ದ್ದಾರೆ ಹಾಗೂ ಸಮಿತಿಯು ಧರ್ಮ ಜಾಗೃತಿಯ ಉದ್ದೇಶದಿಂದ ೫ಹೊಸ ಗ್ರಂಥಗಳನ್ನು ಪ್ರಕಾಶಿಸಿದೆ. ಈ ರೀತಿ ಯಲ್ಲಿ ವಿವಿಧಾಂಗದಿಂದ ಧರ್ಮಪ್ರಸಾರದ ಕಾರ್ಯ ಮಾಡುತ್ತಾ ಸಮಿತಿಯು ಲಕ್ಷಗಟ್ಟಲೆ ಹಿಂದೂಗಳಲ್ಲಿ ಧರ್ಮಜಾಗೃತಿ ಮಾಡು ತ್ತಿದೆ. ಹಿಂದುತ್ವನಿಷ್ಠ ಪತ್ರಕರ್ತರ ಸಂಘಟನೆಯಾಗಲು ಮುಂಬೈಯಲ್ಲಿ ದೇಶ ಭಕ್ತ ಪತ್ರಕರ್ತ ಸಂಘದ ಸ್ಥಾಪನೆ ಮಾಡ ಲಾಯಿತು ಹಾಗೂ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತವಾಗಿ ೮೯ ಸ್ಥಳಗಳಲ್ಲಿ ಹಿಂದೂಸಂಘಟನಾ ಮೇಳ ವನ್ನು ಆಯೋಜಿಸಿ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳಲ್ಲಿ ಜನಜಾಗೃತಿ ಮಾಡಿತು.

ಪ್ರಥಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಫಲಶೃತಿ!

ಒಂದು ಸಂಘಟನೆಯೆಂದು ಕಾರ್ಯ ಮಾಡುವುದಕ್ಕಿಂತ
ಸಂಘಟಿತರಾಗಿ ಕಾರ್ಯ ಮಾಡಬೇಕು, ಎಂಬುದರತ್ತ ಎಲ್ಲರ ಒಲವು!
ಈ ಅಧಿವೇಶನದ ಮೊದಲನೇ ದಿನ ಅನುಭವಕಥನ ಮಾಡುವಾಗ ಹಾಗೂ ಕಳೆದ ವರ್ಷ ನಡೆದ ಕಾರ್ಯದ ವರದಿ ಮಂಡಿಸುವಾಗ ಹಿಂದುತ್ವನಿಷ್ಠರ ಒಲವು ಒಂದು ಸಂಘಟನೆ ಎಂದು ಕಾರ್ಯ ಮಾಡುವುದಕ್ಕಿಂತ ಎಲ್ಲ ಸಂಘಟನೆಗಳು ಕೂಡ ಒಟ್ಟಾಗಿ ಕಾರ್ಯ ಮಾಡಬೇಕು, ಎಂಬಂತೆ ಒಲವಿತ್ತು. ಪನೂನ ಕಾಶ್ಮೀರದ ಶ್ರೀ.ಅಶ್ವನಿಕುಮಾರ ಚ್ರೊಂಗೂ, ರಾಷ್ಟ್ರೀಯ ಆರ್ಯ ನಿರ್ಮಿತಿ ಸಭೆಯ ಶ್ರೀ.ಕೃಷ್ಣದೇವ ಆರ್ಯ ಇವರಂತಹ ಹಲವರು ಈ ರೀತಿ ಸ್ಪಷ್ಟವಾಗಿ ಉಲ್ಲೇಖಿಸಿದರು ಕೂಡ. ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪ.ಪೂ.ಡಾ.ಜಯಂತ ಆಠವಲೆಯವರ ಸಂಕಲ್ಪ ಹಾಗೂ ಆಶೀರ್ವಾದದಿಂದ ನಡೆದ ಮೊದಲ ಹಿಂದೂ ಅಧಿವೇಶನದ ಬಳಿಕ ಹಿಂದುತ್ವನಿಷ್ಠರ ಮನಸ್ಸು ಒಂದಾಗಿದೆ ಅಲ್ಲದೆ ಸಂಘಟನೆಯ ಚೌಕಟ್ಟನ್ನು ಮೀರಿ ಇನ್ನೂ ಹೆಚ್ಚು ವಿಶಾಲವಾಗಿದೆ, ಎನ್ನುವುದು ಅಧಿವೇಶನದ ಮೊದಲ ದಿನದ ದ್ವಿತೀಯ ಅವಧಿಯಲ್ಲಿ ಕಂಡುಬಂದಿತು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳಲ್ಲಿ ಧರ್ಮಜಾಗೃತಿ ಮಾಡಿರಿ! - ಸ್ವಾಮಿ ಮಹೇಶ ಯೋಗಿ, ಆರ್ಯ ಸಮಾಜ, ಉತ್ತರಪ್ರದೇಶ

ಹಿಂದೂಗಳ ದೇವಾಲಯಗಳಿವೆ; ಆದರೆ ಅಲ್ಲಿ ಧರ್ಮವನ್ನು ಹೇಳುವವರು ಯಾರೂ ಇಲ್ಲ, ಎಂಬಂತಹ ಸ್ಥಿತಿಯಿದೆ. ಇತರ ಪಂಥದವರ ಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಆದ್ದರಿಂದ ಹಿಂದೂಗಳಿಗೆ ಧರ್ಮವನ್ನು ಹೇಳಿ ಕೊಡುವುದು ತುಂಬಾ ಆವಶ್ಯಕವಿದೆ. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಕೂಡ ತಮ್ಮೊಂದಿಗೆ ಮತ್ತೊಬ್ಬ ಹಿಂದೂವಿಗೆ ಧರ್ಮಶಿಕ್ಷಣವನ್ನು ನೀಡುವ ಸರಣಿಯನ್ನು ಪ್ರಾರಂಭಿಸಬೇಕು, ಎಂದು ಸ್ವಾಮೀ ಮಹೇಶ ಯೋಗಿಯವರು ಮಾರ್ಗದರ್ಶನ ಮಾಡಿದರು.

ಸಂಕಷ್ಟದಲ್ಲಿರುವಾಗ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಭಗವಾನ್ ಶ್ರೀಕೃಷ್ಣನ ನಾಮಸ್ಮರಣೆ ಮಾಡಿರಿ!

ಧರ್ಮರಕ್ಷಣೆಯ ಕಾರ್ಯ ಮಾಡುವಾಗ ಎಷ್ಟೋ ಸಲ ಹಿಂದುತ್ವನಿಷ್ಠರು ಕಠಿಣ ಪ್ರಸಂಗವನ್ನು ಎದುರಿಸಬೇಕಾಗುತ್ತದೆ. ತಕ್ಷಣ ಆ ಸಮಯದಲ್ಲಿ ಧರ್ಮಸಂಸ್ಥಾಪನೆಯ ದೇವತೆಯಾಗಿರುವ ಭಗವಾನ್ ಶ್ರೀಕೃಷ್ಣನಿಗೆ ಶರಣಾಗೋಣ ಹಾಗೂ “ಹೇ ಶ್ರೀಕೃಷ್ಣಾ ಈ ಆಪತ್ತನ್ನು ಎದುರಿಸಲು ನೀನೇ ನನಗೆ ಶಕ್ತಿ ನೀಡು, ಎಂದು ಪ್ರಾರ್ಥಿಸೋಣ" ಕ್ರಿ.ಶ.೨೦೨೩ರ ತನಕ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವ ವರೆಗೂ ಹಿಂದುತ್ವನಿಷ್ಠರು ಭಗವಾನ್ ಶ್ರೀಕೃಷ್ಣನ ಓಂ ನಮೋ ಭಗವತೇ ವಾಸುದೇವಾಯ | ಈ ನಾಮಜಪವನ್ನು ಮಾಡಬೇಕು. ಮೊದಲಿನಿಂದಲೇ ನಾಮ ಸಾಧನೆಯನ್ನು ಮಾಡುತ್ತಿರುವವರು ತಾವು ಮಾಡುತ್ತಿರುವ ಸಾಧನೆಯನ್ನು ಮುಂದುವರಿಸ ಬಹುದು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸ್ವತಃ ಸಾಧನೆ ಮಾಡಿ ವೀರ ಅರ್ಜುನನಂತೆ ಆತ್ಮಬಲಸಂಪನ್ನರಾಗಿರಿ ! ನಮ್ಮ ನಾಲಿಗೆಯಲ್ಲಿ ಶ್ರೀಕೃಷ್ಣನ ನಾಮವಿದ್ದರೆ, ನಿಸ್ಸಂದೇಹವಾಗಿ ನಾವು ಬಿಡುವ ಬಾಣ ಗುರಿ ಮುಟ್ಟುವುದು.

ಹಿಂದೂ ಧರ್ಮಸಂಸ್ಕ ತಿಯನ್ನು ಬಲವಾಗಿ ಬೇರೂರಿಸಿ ಲಾರ್ಡ್ ಮೆಕಾಲೆಯು ನೆಟ್ಟ ಸಂಸ್ಕ ತಿಯನ್ನು ಕಿತ್ತೊಗೆಯಬೇಕಾಗಿದೆ! - ಸ್ವಾಮಿ ಪ್ರಜ್ಞಾನಂದ ಸರಸ್ವತಿ,

ರಾಷ್ಟ್ರೀಯ ಸಂಯೋಜಕರು, ಅಖಿಲ 
ಭಾರತೀಯ  ರಾಮರಾಜ್ಯ ಪರಿಷತ್ತು ಹಾಗೂ
 ಪಿತಾಂಬರ ಯೋಗಪೀಠಾಧೀಶ್ವರ, ಕಾನಪುರ.
ಇಂದು ಸಂಸತ್ತಿನಲ್ಲಿ ಶೇ.೮೦ರಷ್ಟು ಸದಸ್ಯರು ಹಿಂದೂಗಳಾಗಿದ್ದಾರೆ; ಆದರೆ ಯಾರೂ ಕೂಡ ಹಿಂದೂಹಿತದ ಪಕ್ಷದಲ್ಲಿ ತಮ್ಮ ವಿಚಾರವನ್ನು ಮಂಡಿಸುವುದಿಲ್ಲ. ಆದ್ದರಿಂದ ನಾವು ಯಾವುದೇ ರಾಜಕೀಯ ಬೆಂಬಲವಿಲ್ಲದೆ ಹಿಂದೂ ರಾಷ್ಟ್ರವನ್ನು ಕಟ್ಟಬೇಕಾಗಿದೆ. ಅದಕ್ಕಾಗಿ ಮೊದಲು ಹಿಂದೂಗಳಿಗೆ ಹಿಂದೂ ಧರ್ಮ ಸಂಸ್ಕೃತಿಯ ಮಹತ್ವವನ್ನು ಹೇಳಬೇಕಾ ಗಿದೆ. ಧರ್ಮಸಂಸ್ಕ ತಿಯ ಬೇರನ್ನು ಮೂಲ ದಿಂದ ಬಲಪಡಿಸಿ ಲಾರ್ಡ್ ಮೆಕಾಲೆಯು ನೆಟ್ಟ ಸಂಸ್ಕೃತಿಯನ್ನು ಕಿತ್ತೊಗೆಯಬೇಕಾ ಗಿದೆ, ಎಂದು ಕಾನಪುರದ ಅಖಿಲ ಭಾರತೀಯ ರಾಮರಾಜ್ಯ ಪರಿಷತ್ತಿನ ಯೋಗಿ ಸ್ವಾಮೀ ಪ್ರಜ್ಞಾನಂದ ಸರಸ್ವತಿ ಯವರು ಅಧಿವೇಶನದ ಮೊದಲ ಅವಧಿಯಲ್ಲಿ ಉಪಸ್ಥಿತರನ್ನು ಸಂಬೋಧಿಸಿ ಹೇಳಿದರು. ಸ್ವಾಮೀ ಪ್ರಜ್ಞಾನಂದರು ಮುಂದೆ ಮಾತನಾಡುತ್ತಾ, ಪ.ಪೂ. ಡಾ.ಆಠವಲೆಯವರ ಸಂಕಲ್ಪದಂತೆ ಸ್ಥಾಪಿಸಿದ ಈ ವೇದಿಕೆಯ ಮೇಲೆ ಮುಕ್ತ ಮನಸ್ಸಿನಿಂದ ವಿಚಾರವನ್ನು ಮಂಡಿಸಬೇಕು. ಈ ಸ್ಥಳದಲ್ಲಿ ಈಶ್ವರಭಕ್ತಿ ಯಿಂದ ಪ್ರೇರಿತರಾದ ಎಲ್ಲ ಜನರು ಕೂಡ ಜಾಗೃತರಾಗಿದ್ದಾರೆ, ಜಾಗೃತರಾದವರು ಇತರರನ್ನು ಜಾಗೃತಗೊಳಿಸಬಹುದು ಎಂದರು.

ಹಿಂದೂ ರಾಷ್ಟ್ರದ ಸ್ಥಾಪನೆ ಈ ವಿಷಯದಲ್ಲಿ ಬೋಧಪ್ರದ ಅಂಶಗಳ ಮೇಲೆ ಗಣ್ಯರು ವ್ಯಕ್ತಪಡಿಸಿದ ವಿಚಾರ!

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದ ಸಮಯ ನಿರ್ಧರಿಸಿ ಪೂರ್ಣಗೊಳಿಸಲು ಭಗವಾನ್ ಶ್ರೀಕೃಷ್ಣನ ಉಪಾಸಕರಾಗಿ! - ಪೂ.ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ವಿದ್ಯಾಧಿರಾಜ ಸಭಾಗೃಹ (ಗೋವಾ): ಈ ಅಧಿವೇಶನವು ಹವ್ಯಾಸಿಗರ ಸಮ್ಮೇಳನ ವಲ್ಲ, ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶ ದಿಂದ ದೂರದೂರದಿಂದ ನೆರೆದ ಹಿಂದೂ ಧರ್ಮವೀರರ ಹಾಗೂ ವಿಚಾರವಂತರ ಒಗ್ಗೂಡುವಿಕೆಯಾಗಿದೆ. ನಮಗೆ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯವನ್ನು ಸಮಯ ನಿರ್ಧರಿಸಿ ಪೂರ್ಣಗೊಳಿಸಬೇಕಾಗಿದೆ.  ಅದಕ್ಕಾಗಿ ಧರ್ಮಸಂಸ್ಥಾಪನೆಯ ದೇವತೆ ಯಾದ ಭಗವಾನ್ ಶ್ರೀಕೃಷ್ಣನ ಉಪಾಸನೆ ಮಾಡಬೇಕು! ಯೋಗೇಶ್ವರ ಕೃಷ್ಣನು ಇರುವಲ್ಲಿ ಖಚಿತ ವಿಜಯವಿರುತ್ತದೆ, ಎಂದು ಭಗವದ್ಗೀತೆ ಹೇಳುತ್ತದೆ; ಆದ್ದರಿಂದ ವೀರ ಅರ್ಜುನ ನಂತೆ ಶ್ರೀಕೃಷ್ಣನ ಉಪಾಸಕ ರಾಗಿ!, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಪೂ.ಡಾ.ಚಾರುದತ್ತ ಪಿಂಗಳೆಯವರು ನುಡಿದರು.

ದ್ವಿತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನದ ಬಗ್ಗೆ ಅಭಿಮಾನವೆನಿಸುತ್ತದೆ! - ಗುಜರಾತಿನ ಮುಖ್ಯಮಂತ್ರಿ ಶ್ರೀ. ನರೇಂದ್ರ ಮೋದಿ

ಪಾಶವೀ ವೃತ್ತಿಯನ್ನು ಪ್ರತಿಭಟಿಸುವುದು ಹಿಂದೂಗಳ ಭಾಗ್ಯಕ್ಕೆ!
ಪ್ರೀತಿ, ಮಾನವತೆ ಮತ್ತು ಪರಮಾತ್ಮಾ ಇವು ಗಳೊಂದಿಗೆ ಆತ್ಮೀಯತೆ, ಅಹಿಂಸೆ, ಸತ್ಯ ಮತ್ತು ಸಾತ್ತ್ವಿಕತೆಗಳಿಗೆ ಪ್ರಾಧಾನ್ಯತೆ ನೀಡಿ ಪ್ರತಿಯೊಬ್ಬ ಹಿಂದೂ ವಿನ ವ್ಯವಹಾರ ನಡೆಯುತ್ತಿ ದ್ದರೂ ಪಾಶವೀ ವೃತ್ತಿಯನ್ನು ಪ್ರತಿಕಾರ ಮಾಡುವುದೇ ನಮ್ಮ ಭಾಗ್ಯದಲ್ಲಿ ಬರೆ ದಿದೆ. ಪ್ರತಿಯೊಂದು ಕ್ಷಣ ಜಾಗೃತರಾಗಿದ್ದು ದೌರ್ಜನ್ಯದ ವಿರುದ್ಧ ಗರ್ಜಿಸುವುದು ನಮ್ಮ ಪರಂಪರೆಯಾಗಿದೆ. - ನರೇಂದ್ರ ಮೋದಿ

ಹಿಂದುತ್ವಕ್ಕಾಗಿ ಕಾರ್ಯ ಮಾಡುವವರೇ, ಭಗವಂತನ ಅಧಿಷ್ಠಾನದ ಮಹತ್ವವನ್ನು ಅರಿತುಕೊಳ್ಳಿರಿ!

‘ಕಾರ್ಯದ ಒತ್ತಡದಿಂದಾಗಿ ಅಥವಾ ತತ್ಕಾಲಿನ ಯಶಸ್ಸು ದೊರೆಯದ್ದರಿಂದ ಕೆಲವು ಹಿಂದುತ್ವವಾದಿಗಳು ನಿರಾಶೆಗೊಳಗಾಗುತ್ತಾರೆ. ಹಾಗಾಗಬಾರದೆಂದು ಮತ್ತು ಕಾರ್ಯ ಮುಂದುವರಿಯಲು ಸಾಧನೆ ಮಾಡುವುದು ಅತ್ಯಾವಶ್ಯಕವಾಗಿದೆ.’ -ಡಾ.ಆಠವಲೆ (ವೈಶಾಖ ಕೃಷ್ಣ ಪಕ್ಷ ೩, ಕಲಿಯುಗ ವರ್ಷ ೫೧೧೫ (೨೭.೫.೨೦೧೩))

ಹಿಂದುತ್ವದ ನಿಷ್ಕಾಮ ಕಾರ್ಯ ಮಾಡಿ ಶೇ.೬೧ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಧಾರ (ಮಧ್ಯಪ್ರದೇಶ)ನಲ್ಲಿನ ಭೋಜಶಾಲಾ ಮುಕ್ತಿಯಜ್ಞ ಸಮಿತಿಯ ರಾಷ್ಟ್ರೀಯ ಸಂಯೋಜಕ ಶ್ರೀ.ನವಲಕಿಶೋರ ಶರ್ಮಾ

ಶ್ರೀ.ಶರ್ಮಾರವರನ್ನು ಸತ್ಕರಿಸುತ್ತಿರುವ ಪೂ.(ಡಾ.) ಚಾರುದತ್ತ ಪಿಂಗಳೆ

ಸಂತ ಮತ್ತು ಧರ್ಮಾಚಾರ್ಯರ ಹಸ್ತದಿಂದ ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ-ನಿರ್ಮಿತ ಗ್ರಂಥಗಳ ಪ್ರಕಾಶನ!


ಗ್ರಂಥಗಳ ಪ್ರಕಾಶನ ಮಾಡುತ್ತಿರುವ ಪೂ.(ಡಾ.)ಚಾರುದತ್ತ
ಪಿಂಗಳೆ, ಸ್ವಾಮಿ ಮಹೇಶ ಯೋಗಿ, ಶ್ರೀ ಶ್ರೀ ಪ್ರಣವಾನಂದ ರಾಮಸ್ವಾಮಿ ಮತ್ತು ಶ್ರೀ ಬಸವರಾವ ಸ್ವಾಮಿ
ರಾಮನಾಥಿ: ಗೋವಾದಲ್ಲಿ ನಡೆದ ದ್ವಿತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಜೂನ್ ೬ರಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ-ನಿರ್ಮಿತ ಗ್ರಂಥಗಳ ಪ್ರಕಾಶನವನ್ನು ಸಂತ ಮತ್ತು ಧರ್ಮಾಚಾರ್ಯರ ಶುಭಹಸ್ತದಿಂದ ಮಾಡಲಾಯಿತು.

‘ಸಮಯ ಟಿವಿ’ ಈ ಕನ್ನಡ ವಾರ್ತಾವಾಹಿನಿಯ ಚರ್ಚಾಕೂಟದಲ್ಲಿ ಹಿಂದೂ ರಾಷ್ಟ್ರದ ನಿರ್ಮಿತಿಯ ವಿಷಯದಲ್ಲಿ ಮಾರ್ಕ್ಸ್‌ವಾದಿ ನಾಯಕನ ಹಿಂದೂದ್ವೇಷ! ‘ಹಿಂದೂ ರಾಷ್ಟ್ರ’ ಕೇವಲ ಭಾರತಕ್ಕಾಗಿ ಅಲ್ಲ, ಅದು ಜಗತ್ತಿಗೇ ಹಾನಿಕಾರಿಯಂತೆ!’

‘ಸಮಯ ಟಿವಿ’ಯ ಚರ್ಚಾಕೂಟದಲ್ಲಿ ಪಾಲ್ಗೊಂಡವರು
ಎಡದಿಂದ ಸೌ.ಲಕ್ಷ್ಮೀ ಪೈ, ಶ್ರೀ.ಮೋಹನ ಗೌಡ, ಮಾರ್ಕ್ಸ್‌ವಾದಿ ನೇತಾರರಾದ ನಾಗರಾಜ ಮತ್ತು ನಿರೂಪಕ ಶ್ರೀ.ವಸಂತ

ಫಲಕ ಪ್ರಸಿದ್ಧಿಗಾಗಿ

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ!
ಸೂಚನೆ: ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

೧.ಹಿಂದೂಗಳೇ, ರಾಷ್ಟ್ರಪುರುಷರನ್ನು ತಪ್ಪು 
ರೀತಿಯಲ್ಲಿ ಚಿತ್ರೀಕರಿಸುವ ಮಾಲಿಕೆಗಳನ್ನು ವಿರೋಧಿಸಿ!
ಭಾರತ ಕಾ ವೀರ ಪುತ್ರ ಮಹಾರಾಣಾ ಪ್ರತಾಪ ಮತ್ತು ಆಗಾಮಿ ಜೋಧಾ ಅಕ್ಬರ ಇವುಗಳನ್ನು ದೂರಚಿತ್ರವಾಹಿನಿಗಳ ಮಾಲಿಕೆಗಳು ರಜಪೂತರ ಇತಿಹಾಸವನ್ನು ತಪ್ಪು ರೀತಿಯಲ್ಲಿ ಚಿತ್ರೀಕರಿಸಿವೆ. ರಾಜಸ್ಥಾನದ ಶ್ರೀ ರಾಜಪೂತ ಕರಣಿ ಸೇನೆಯು ಈ ಮಾಲಿಕೆಯನ್ನು ವಿರೋಧಿಸಿದೆ.

ಹಿಂದೂ ರಾಷ್ಟ್ರ ಸ್ಥಾಪನೆಯ ವಿಷಯದಲ್ಲಿ ಎಳ್ಳಷ್ಟು ಅನುಮಾನ, ವಿಕಲ್ಪ ಬೇಡ! -ಉಪಾನಂದ ಬ್ರಹ್ಮಚಾರೀ, ಸಂಪಾದಕರು, ಹಿಂದೂ ಎಕ್ಸಿಸ್‌ಸ್ಟೆನ್ಸ್, ಕೋಲಕಾತಾ

ಹಿಂದೂ ರಾಷ್ಟ್ರದ ಸ್ಥಾಪನೆ ಖಂಡಿತವಾಗಿ ಆಗಲಿದೆ, ಎಂಬ ಆತ್ಮವಿಶ್ವಾಸ ಎಲ್ಲರೂ ಇಟ್ಟುಕೊಳ್ಳಬೇಕಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ಯೇಯದ ವಿಷಯದಲ್ಲಿ ಎಳ್ಳಷ್ಟೂ ಸಂದೇಹ ಅಥವಾ ವಿಕಲ್ಪ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿರಿ. ಇದು ನಮ್ಮ ಧ್ಯೇಯದ ಮಾರ್ಗ ದಲ್ಲಿ ಒಂದು ದೊಡ್ಡ ಅಡಚಣೆಯಾಗಿದೆ, ಎಂಬ ಅಮೂಲ್ಯ ಮಾರ್ಗದರ್ಶನವನ್ನು ಕೊಲಕಾತಾದ ಹಿಂದೂ ಎಕ್ಸಿಸ್‌ಸ್ಟೆನ್ಸ್ ಈ ಸಂಕೇತಸ್ಥಳದ ಸಂಪಾದಕರಾದ ಶ್ರೀ. ಉಪಾನಂದ ಬ್ರಹ್ಮಚಾರಿಯವರು ಹೇಳಿದರು.

ಶ್ರೀಲಂಕಾದ ತಮಿಳಿಯರು ಹಿಂದೂಗಳೇ! - ಅರ್ಜುನ ಸಂಪಥ

ತಮಿಳುನಾಡಿನ ‘ಹಿಂದೂ ಮಕ್ಕಲ ಕಚ್ಛಿ’ ಸಂಘಟನೆಯ ಸಂಸ್ಥಾಪಕ ರಾದ ಅಧ್ಯಕ್ಷ ಶ್ರೀ.ಅರ್ಜುನ ಸಂಪಥರವರು ಶ್ರೀಲಂಕಾದಲ್ಲಿನ ತಮಿಳು ಹಿಂದೂಗಳ ಸಮಸ್ಯೆ ಗಳನ್ನು ಮಂಡಿಸುವಾಗ, “ಶ್ರೀಲಂಕಾ ದಲ್ಲಿನ ತಮಿಳರು ಕೇವಲ ತಮಿಳರಲ್ಲ, ಅವರು ಮೊದಲು ಹಿಂದೂಗಳಾಗಿದ್ದಾರೆ; ಆದರೆ ಪ್ರಸಾರಮಾಧ್ಯಮಗಳು ಅವರನ್ನು ತಮಿಳ ರೆಂದು ಉಲ್ಲೇಖಿಸಿ ತಪ್ಪು ಮಾಹಿತಿಯನ್ನು ಹರಡಿಸುತ್ತಿವೆ. ಶ್ರೀಲಂಕಾ ಕೇವಲ ತಮಿಳು ಹಿಂದೂ ವಿರೋಧಿಯಾಗಿರದೇ ಅದು ಭಾರತದ ಶತ್ರು ವಾಗಿದೆ. ಶ್ರೀಲಂಕಾವು ಸತತ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ಪಾಕಿಸ್ತಾನದ ವಿಮಾನಗಳಿಗೆ ಶ್ರೀಲಂಕಾದಲ್ಲಿ ಪೆಟ್ರೋಲ್ ತುಂಬಿಸಲಾಗುತ್ತಿತ್ತು. ಇದನ್ನು ಅಲ್ಲಿನ ತಮಿಳು ಹಿಂದೂಗಳು ರನ್‌ವೇಗೆ ಹೋಗಿ ತಡೆದಿದ್ದರು. ಏಕೆಂದರೆ ಭಾರತವು ಅವರ ಮಾತೃಭೂಮಿಯಾಗಿದೆ. ಈಗ ಶ್ರೀಲಂಕಾಕ್ಕೆ ಚೀನಾವು ಆರ್ಥಿಕ ಹಾಗೂ ಸೈನಿಕ ಸಹಾಯ ಮಾಡುತ್ತಿದೆ. ಭಾರತವೂ ಶ್ರೀಲಂಕಾಗೆ ಸೈನ್ಯ ಸಹಾಯ ಮಾಡುತ್ತಿದೆ. ಹಿಂದೂಗಳು ಈಗ ಶ್ರೀಲಂಕಾದ ತಮಿಳು ಹಿಂದೂಗಳಿಗೆ ಸಹಾಯ ಮಾಡಬೇಕು’ ಎಂದರು.

ಬಾಂಗ್ಲಾದೇಶದಲ್ಲಿ ಹಿಂದೂಗಳು ನಾಮಾವಶೇಷದ ಹಾದಿಯಲ್ಲಿದ್ದಾರೆ! - ರವಿಂದ್ರ ಘೋಷ, ಬಾಂಗ್ಲಾದೇಶ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಮಾಹಿತಿ ಯನ್ನು ಬಾಂಗ್ಲಾದೇಶದಲ್ಲಿಯ ‘ಬಾಂಗ್ಲಾದೇಶಿ ಮೈನಾರಿಟಿ ವಾಚ್’ನ ಶ್ರೀ.ರವಿಂದ್ರ ಘೋಷ ಇವರು ‘ಸ್ಲೈಡ್ ಶೋ’ ಮತ್ತು ಧ್ವನಿಚಿತ್ರಮುದ್ರಿಕೆ ಮೂಲಕ ನೀಡಿ ದರು. ಬಾಂಗ್ಲಾದೇಶದಲ್ಲಿಯ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮತಾಂಧರಿಂದ ಅಮಾನವೀಯ ದೌರ್ಜನ್ಯಗಳಾಗುತ್ತಿದೆ. ಹಿಂದೂ ಮಹಿಳೆಯರನ್ನು ಅಪಹರಿಸಿ ಅವರನ್ನು ಮತಾಂತರ ಮಾಡಲಾಗುತ್ತಿದೆ. ಮತಾಂಧರನ್ನು ಹಿಂದೂ ಮಹಿಳೆಯರೊಂದಿಗೆ ಬಲವಂತವಾಗಿ ವಿವಾಹವನ್ನು ಮಾಡಿಸುತ್ತಾರೆ. ಅದೇ ರೀತಿ ಮಹಿಳೆಯರ ಮೇಲೆ ಅತ್ಯಾಚಾರವನ್ನು ಮಾಡಿ ಅವರ ಕೊಲೆಯನ್ನು ಮಾಡುತ್ತಿದ್ದಾರೆ, ಎಂದು ಹೇಳಿ ಕೆಲವು ಉದಾಹರಣೆಯನ್ನು ಕೊಟ್ಟರು. ಅಲ್ಲದೇ ಭವಿಷ್ಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ನಾಮಾಶೇಷವಾಗುವುದು, ಎಂದು ಭೀತಿ ವ್ಯಕ್ತಪಡಿಸಿದರು.

ನೇಪಾಳ ಹಿಂದೂ ರಾಷ್ಟ್ರವಾಗಿತ್ತು ಮತ್ತು ಮುಂದೆಯೂ ಆಗಿರುವುದು! - ಜಗದಬಹಾದುರ ಥಾಪಾ, ನೇಪಾಳ

ಶೇ.೮೧ಹಿಂದೂಗಳಿರುವ ನೇಪಾಳದಲ್ಲಿ ಈಗ ಶೇ.೬೨ರಷ್ಟು ಸಾಮ್ಯವಾದಿಗಳು ಆಂತರಿಕ ಸಂವಿಧಾನದಲ್ಲಿ ನೇಪಾಳವನ್ನು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿ ದ್ದಾರೆ. ಇದರ ವಿರುದ್ಧ ಹಿಂದೂ ರಾಷ್ಟ್ರ ನೇಪಾಳ ವೈದಿಕ ಸಾಮ್ಯವಾದಿ ಸಂಘಟನೆಯು ಬರುವ ಜೂನ್ ೨೬ರಿಂದ ೨೮ರ ಕಾಲಾವಧಿಯಲ್ಲಿ ನೇಪಾಳ ಬಂದ್ ಆಂದೋಲನ ಮಾಡಲಿದೆ. ಇದನ್ನು ಕಡೆಗಣಿಸಿದರೆ ಮುಂದೆ ಅನಿಶ್ಚಿತ ಕಾಲಾವಧಿ ವರೆಗೆ ಬಂದ್‌ನ ಆಂದೋಲನ ಮಾಡುವೆವು. ಈ ಸಮಯದಲ್ಲಿ ಭಾರತೀಯ ಹಿಂದೂಗಳೂ ಸಹಾಯ ಮಾಡಬೇಕು. ನಾವು ಜಾತ್ಯತೀತ ಸಂವಿಧಾನವನ್ನು ಎಂದೂ ಸ್ವೀಕರಿಸುವುದಿಲ್ಲ. ನೇಪಾಳ ಹಿಂದೆಯೂ ಹಿಂದೂ ರಾಷ್ಟ್ರವಾಗಿತ್ತು, ಈಗಲೂ ಇದೆ ಮತ್ತು ಮುಂದೆಯೂ ಇರುವುದು ಎಂಬ ದೃಢ ಅಭಿಪ್ರಾಯ ವನ್ನು ಹಿಂದೂ ರಾಷ್ಟ್ರ ನೇಪಾಳ ವೈದಿಕ ಸಾಮ್ಯವಾದಿ ಸಂಘಟನೆಯ ಶ್ರೀ.ಜಗದಬಹಾದುರ ಥಾಪಾರವರು ಮಂಡಿಸಿದರು.

ಹಿಂದೂಗಳೇ, ಧರ್ಮನಿಷ್ಠ ರಾಜಕಾರಣಿಗಳನ್ನು ಆರಿಸಿರಿ! - ಸ್ವಾಮಿ ಕುಮಾರಾನಂದ, ಧರ್ಮಗುರು, ಮಲೇಶಿಯಾ

“ಎರಡುವರೆ ಸಾವಿರ ವರ್ಷ ಗಳ ಹಿಂದೆ ಭಾರತದಲ್ಲಿ ಹಿಂದೂ ಗಳು ಬೌದ್ಧ ಮತ್ತು ಚೀನಿ ಆಕ್ರಮಣ ಕಾರರ ಜೊತೆ ಯುದ್ಧವನ್ನು ಮಾಡು ತ್ತಿದ್ದರು ಮತ್ತು ಈಗಲೂ ಅದೇ ಸ್ಥಿತಿ ಇದೆ. ಇಂದಿನ ಹಿಂದೂಗಳು ಕ್ರೈಸ್ತರು ಮತ್ತು ಮತಾಂಧರ ಜೊತೆ ಹೋರಾಡುತ್ತಿದ್ದಾರೆ. ಈ ಸ್ಥಿತಿಗೆ ಹಿಂದೂಗಳೇ ಜವಾಬ್ದಾರರಾಗಿದ್ದಾರೆ. ಭಾರತೀಯ ರಾಜಕಾರಣಿಗಳಿಂದಲೇ ಪಾಕ್, ಬಾಂಗ್ಲಾದೇಶ, ಶ್ರೀಲಂಕಾ ಈ ದೇಶಗಳ ನಿರ್ಮಿತಿಯು ಆಗಿದೆ. ಹಿಂದೂ ರಾಷ್ಟ್ರವಾಗಿದ್ದ ನೇಪಾಳದಲ್ಲಿ ಸಾಮ್ಯವಾದಿ ರಾಜಕಾರಣಿಗಳು ಆರಿಸಿ ಬಂದಿದ್ದರಿಂದ ಅಲ್ಲಿಯೂ ದುಃಸ್ಥಿತಿ ಇದೆ. ಭಾರತದಲ್ಲಿ ಹಿಂದೂಗಳೇ ಹಿಂದೂ ರಾಷ್ಟ್ರ, ರಾಮರಾಜ್ಯ ಸ್ಥಾಪನೆಯನ್ನು ಮಾಡಬಹುದು. ಅದಕ್ಕಾಗಿ ಹಿಂದೂಗಳು ಜಾಗೃತರಾಗಿ ಧರ್ಮನಿಷ್ಠ ರಾಜಕಾರಣಿಗಳನ್ನು ಆರಿಸಿರಿ", ಎಂದು ಮಲೇಶಿಯಾ ಮತ್ತು ಶ್ರೀಲಂಕಾದ ಧರ್ಮಗುರು ಸ್ವಾಮಿ ಕುಮಾರಾನಂದ ಇವರು ಕರೆ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ದತ್ತಗುರುಗಳ ಶಾಪ ತಟ್ಟಿದ್ದರಿಂದ ಭಾಜಪದ ಪತನ!

೨೦೦೭ರಲ್ಲಿ ಚಿಕ್ಕಮಗಳೂರಿನ ದತ್ತಪೀಠ ಮಳೆಯಿಂದಾಗಿ ಕುಸಿದಿತ್ತು. ಅಲ್ಲಿನ ದತ್ತ ಪಾದುಕೆಗಳ ಪೂಜೆಯೂ ನಿಂತಿತ್ತು. ಶ್ರೀರಾಮ ಸೇನೆಯ ವತಿಯಿಂದ ತತ್ಕಾಲೀನ ಭಾಜಪ ಸರಕಾರಕ್ಕೆ ಅದನ್ನು ದುರುಸ್ತಿ ಮಾಡಿ ಪೂಜೆ ಆರಂಭಿಸುವಂತೆ ಮನವಿ ನೀಡಲಾಗಿತ್ತು. ಆದರೆ ಸರಕಾರವು ೩-೪ವರ್ಷಗಳಾದರೂ ಅದನ್ನು ದುರುಸ್ತಿ ಮಾಡಿರ ಲಿಲ್ಲ. ಆಗ ನಾನು ಸ್ವತಃ ಹೀಗೆ ಹೇಳಿದ್ದೆ, ‘ದತ್ತಗುರುಗಳ ಪಾದುಕಾಪೂಜೆ ನಿಂತು ಹೋಗಿದೆ. ನಿಮಗೆ ಅದರ ಶಾಪ ತಟ್ಟುವುದು.’ ಅದಕ್ಕನುಸಾರ ನಿಜವಾಗಿಯೂ ಈ ವರ್ಷದ ಚುನಾವಣೆಯಲ್ಲಿ ಭಾಜಪ ಸೋಲಬೇಕಾಯಿತು. ಆ ದತ್ತಪಾದುಕೆಗಳ ಪೂಜೆಯನ್ನು ಶ್ರೀರಾಮ ಸೇನೆಯ ವತಿಯಿಂದ ಪುನಃ ಆರಂಭಿಸಲಾಗಿದೆ. ಅಷ್ಟೇ ಅಲ್ಲ ಈಗ ಅದನ್ನು ಭಕ್ತರಿಗೆ ದರ್ಶನಕ್ಕಾಗಿ ತೆರೆದಿಡಲಾಗಿದೆ. - ಶ್ರೀ.ಪ್ರಮೋದ ಮುತಾಲಿಕ, ಶ್ರೀರಾಮ ಸೇನೆ

ಅಧಿವೇಶನದ ಮೊದಲ ದಿನದಿಂದಲೇ ಆರಕ್ಷಕರ ನಿಗಾ!

ಅಧಿವೇಶನದ ಮೊದಲನೆ ದಿನವೇ ಗುಪ್ತಚರ ವಿಭಾಗದ ಇಬ್ಬರು ಆರಕ್ಷಕರು ಅಧಿವೇಶನದ ಸ್ಥಳಕ್ಕೆ ಬಂದು ತಮ್ಮ ಗುರುತಿನಚೀಟಿಯನ್ನು ತೋರಿಸದೆ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾಗಿದೆ, ಎಂದು ಹೇಳಿದರು. ಆಗ ಅವರನ್ನು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ಕರ್ತರು ‘ಈ ಕಾರ್ಯಕ್ರಮವು ಕೇವಲ ಆಮಂತ್ರಿಸಿದವರಿಗೆ ಮಾತ್ರ, ಆದ್ದರಿಂದ ಸಭಾಂಗಣದ ಒಳಗೆ ಹೋಗಲು ಸಾಧ್ಯವಿಲ್ಲ’ ಎಂದು ಹೇಳಿದರು. ತಕ್ಷಣ ಅವರು ತಮ್ಮ ವರಿಷ್ಠ ಆರಕ್ಷಕ ಅಧಿಕಾರಿ ಗಳನ್ನು ಸಂಪರ್ಕಿಸಿದರು. ಆಗ ವರಿಷ್ಠ ಆರಕ್ಷಕ ಅಧಿಕಾರಿಯು ಸಮಿತಿಯ ಕಾರ್ಯ ಕರ್ತರಿಗೆ ‘ನಾವು ಆರಕ್ಷಕರಾಗಿರುವುದರಿಂದ ನಮಗೆ ಯಾವುದೇ ಆಮಂತ್ರಣ ಅಥವಾ ಗುರುತಿನಚೀಟಿಯ ಆವಶ್ಯಕತೆಯಿರುವು ದಿಲ್ಲ. ಆದ್ದರಿಂದ ಆ ಆರಕ್ಷಕರಿಗೆ ಪ್ರವೇಶ ನೀಡಿರಿ ಎಂದು ಹೇಳಿದರು. ಆದರೆ ಕಾರ್ಯಕರ್ತರು ಮಾತ್ರ ಅವರಿಗೆ ಪ್ರವೇಶಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರಿಂದ ಆ ಆರಕ್ಷಕರು ಸಭಾಂಗಣದ ಒಳಗೆ ಹೋಗಲು ಸಾಧ್ಯವಾಗಲಿಲ್ಲ.